ಐನ್‌ಸ್ಟನ್ ಮಿದುಳಿನ ಬುದ್ಧಿವಂತಿಕೆಯ ರಹಸ್ಯ!

ಐನ್‌ಸ್ಟನ್ ಮಿದುಳಿನ ಬುದ್ಧಿವಂತಿಕೆಯ ರಹಸ್ಯ!

ವಿಶ್ವವಿಖ್ಯಾತ ವಿಜ್ಞಾನಿ ಐನ್‍ಸ್ಟನ್ ಅವರ ಹೆಸರನ್ನು ವಿಜ್ಞಾನ ರಂಗದಲ್ಲಿ ಕೇಳದವರೇ ಇಲ್ಲ. ಇವರ ಚಿಂತನ, ಪ್ರಯೋಗ, ಸಿದ್ಧಾಂತ ಮತ್ತು ಸಂಶೋಧನೆಗಳು ಜಗತ್ತಿಗೆ ಇಂದು ಮಾರ್ಗದರ್ಶಿಯಾಗಿವೆ. ಇಂತಹ ಐನ್‌ಸ್ಟನ್ ಅವರ ತಲೆಯೊಳಗಿನ ಮಿದುಳೇನಾದರೂ ವಿಶೇಷತೆಗಳಿಂದ ಕೂಡಿದೆಯೇ? ಎಂದು ಇವರ ಮಿದುಳಿನ ಅಧ್ಯಯನವನ್ನು ಸಾಂಡ್ರಾ ಬಿ ಟೆಲ್ಸನ್ ಅವರು ನಡೆಯಿಸಿ ಅವರು ಹಲವು ಅಭಿಪ್ರಾಯಗಳನ್ನು ದೃಢಪಡಿಸಿದ್ದಾರೆ ಮತ್ತು ‘ಲಾನ್ಸೆಟ್’ ಪತ್ರಿಕೆಯಲ್ಲಿ ಐನ್‌ಸ್ಪನ್ ಬುದ್ಧಿಶಕ್ತಿಗೆ ಇವರ ಮಿದುಳೇ ಕಾರಣವೆಂದು ಹೇಳಿದ್ದಾರೆ.

೧೯೫೫ ರಲ್ಲಿ ತಮ್ಮ ೭೬ ನೇ ವಯಸ್ಸಿನಲ್ಲಿ ಮಿದುಳಿನ ರಕ್ತಸ್ರಾವದಿಂದ ಪ್ರಾಣಬಿಟ್ಟಿದ್ದರು. ಇವರ ಶವ, ಪರೀಕ್ಷೆ ಮಾಡಿದ ವೈದ್ಯ ಥಾಮಸ್ ಹಾರ್ವೇಗೆ ತನ್ನ ಮರಣಾಂತರ ತನ್ನ ಮಿದುಳಿನ ಪರೀಕ್ಷೆ ಮಾಡಬಹುದೆಂದು ಐನ್‌ಸ್ಟನ್ ಹೇಳಿದ್ದರ ಮೇರೆಗೆ ಅವರ ಮಿದುಳನ್ನು ಹೊರತೆಗೆದು ಅದನ್ನು ೮-೧೦ ಹೋಳುಗಳನ್ನಾಗಿ ಮಾಡಿ ಕೆಡದಂತೆ ಪಾರ್ಮಾಲ್ಡಿ ಹೈಡ್ ದ್ರವದಲ್ಲಿ ಅದ್ದಿ
ಉಪ್ಪಿನಕಾಯಿಯ ರೀತಿ ಒಂಡು ಬಾಟಲಿಯಲ್ಲಿ ರಕ್ಷಿಸಿದ್ದರು.

ಆಂಟಾರಿಯೋದ ಹ್ಯಾಮಿಲ್ಟನ್‌ನ ಮ್ಯಾಕ್ ಮಾಸ್ಪರ್ ವಿಶ್ವವಿದ್ಯಾಲಯದ ತಮ್ಮ ಸಹೋದ್ಯೋಗಿಗಳ ಜತೆಗೂಡಿ ಐನ್‌ಸ್ಟನ್ ಅವರ ಮೆದುಳಿನ ಅಧ್ಯಯನ ನಡೆಯಿಸಿದ ಸಾಂಡ್ರಾ ಅವರು ಸಾಮಾನ್ಯ ಬುದ್ಧಿಮತ್ತೆಯನ್ನು ಹೊಂದಿದ ೩೫-ಪುರುಷರು, ೫೬-ಮಹಿಳೆಯರ ಮಿದುಳಿನ ಜತೆಗೆ ಐನ್‌ಸ್ಟನ್ ಅವರ ಮೆದುಳನ್ನು ಹೋಲಿಸಿ ಅಧ್ಯಯನ ನಡೆಯಿಸಿದರು. ಐನ್‌ಸ್ಟನ್ ಅವರ ಮೆದುಳು ಸಾಮಾನ್ಯರ ಮೆದುಳಂತೆ ಇದೆಯಾದರೂ ಸಾಮಾನ್ಯ ಜನರಲ್ಲಿರುವಂತೆ ಪೆರಿಟರ್ ಅಸರ್‌ಕ್ಯೂಲಮ್ ಇಲ್ಲದಿರುವುದು ಮೆದುಳಿನ ಎರಡು ಕಡೆಗಿರುವ ಇನ್‌ಪೆರಿಯರ್ ಪೆರಿಟರ್ ಭಾಗ ವಿಜ್ಞಾನಿಯ ಮೆದುಳಲ್ಲಿ ವಿಸ್ತಾರವಾಗಿ ಬೆಳೆದಿದ್ದು ಇದು ಮಿದುಳಿನ ಎರಡು ದಿಕ್ಕಿಗೆ ಶೇ.೧೫ ರಷ್ಟು ಹೆಚ್ಚಿನ ಭಾಗಕ್ಕೆ ವಿಸ್ತರಿಸಿದ್ದರಿಂದ ಐನ್‍ಸ್ಟನ್ ಅವರ ಅಪಾರ ಬುದ್ಧಿಮತ್ತೆಗೆ ಕಾರಣವಾಗಿರಬಹುದೆಂದು ಸಂಶೋಧಕರು ವಾದಿಸುತ್ತಾರೆ. ಸಾಮಾನ್ಯವಾಗಿ ಎಲ್ಲರ ಮೆದುಳಲ್ಲೂ ಮಧ್ಯದಲ್ಲೊಂದು ಗೀರು ಇರುತ್ತದೆ. ಇದ್ಗು ನೆತ್ತಿಯ ಮೂಲಕ ಮೆದುಳಿನ ಹಿಂಭಾಗಕ್ಕೆ ಕತ್ತಿನವರೆಗೂ ಇರುತ್ತದೆ. ಆದರೆ ಇವರ ಮಿದುಳಿನಲ್ಲಿ ಆಗೀರು ಹಿಂಭಾಗಕ್ಕೆ ಬಂದಿರುವುದಿಲ್ಲ. ಬೇರೆಯಾವ ಮಿದುಳಿನಲ್ಲಿಯೂ ಕಾಣದ ಅಪರೂಪದ ಲಕ್ಷಣ ಇದಾಗಿದೆ. ಇಲ್ಲಿ ನರತಂತುಗಳು ಪರಸ್ಪರ ಬೆಸುಗೆಯಾಗಿರುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ನರಸಂದೇಶಗಳ ವಿನಿಮಯ ಚುರುಕಾಗಿರುವ ಸಾಧ್ಯತೆಗಳೇ ಹೆಚ್ಚು ಎಂದು ಹೇಳುತ್ತ ಈ ಕಾರಣವಾಗಿ ಇವರ ಬುದ್ಧಿಶಕ್ತಿಗೆ ಇದೇ ಕಾರಣವೆಂದು ವಾದಿಸುತ್ತಾರೆ.
*

Previous post ಸ್ವಾಗತ ಸಂಕ್ರಾಂತಿಯೇ!
Next post ಬಡ್ಜಟ್

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys